ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿ ತಳವಾರ ಗ್ರಾಮದ ಶಮಂತ್ ಗೌಡ ಎಂಬುವವರಿಗೆ ಸೇರಿದ ಹಸುವನ್ನು ಹುಲಿ ಹಿಡಿದು ತಿಂದಿದೆ.
ಊರಿನ ಸುಧೀರ್ ಗೌಡ ಎಂಬುವವರ ಮನೆ ಸಮೀಪವೇ ಹುಲಿ ಹಿಡಿದಿದ್ದು ಊರಿನ ಜನರು ಭಯಭೀತಿಗೆಒಳಗಾಗಿದ್ದಾರೆ
ಮಕ್ಕಳು ಶಾಲೆಗೆ ತೆರಳಲು, ಕಾರ್ಮಿಕರು ಕೆಲಸಕ್ಕೆ ಹೋಗದೆ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗ್ಗೆ ಒಂದು ವಾರದ ಹಿಂದೆ ಹಳೇಹಳ್ಳಿ ಸಮೀಪ ಮೂರು ಗೋವುಗಳು ಹುಲಿದಾಳಿಗೆ ಬಲಿಯಾಗಿದ್ದವು. ಈ ಭಾಗದಲ್ಲಿ ಕಳೆದೊಂದು ವರ್ಷದಿಂದ ಅನೇಕ ಜಾನುವಾರುಗಳನ್ನು ಹುಲಿ ಹಿಡಿದು ತಿಂದಿದೆ.
ತಕ್ಷಣ ಅರಣ್ಯ ಇಲಾಖೆಯವರು ಹುಲಿಯನ್ನು ಹಿಡಿದು ಭದ್ರ ಅಭಯರಣ್ಯಕ್ಕೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಯಿಸಿದ್ದಾರೆ. ಹತ್ತಾರು ಗೋವುಗಳು ಸಾಯುತ್ತಿದ್ದರು ಅರಣ್ಯ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಹೀಗೆ ಆದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ # ಆದರ್ಶಗೌಡ ತರುವೆ.
ಹುಲಿದಾಳಿಯಿಂದ ಜಾನುವಾರು ಬಲಿಯಾದಾಗ ಮಾಲೀಕರೆ ಪಶುವೈದ್ಯರನ್ನು ಕರೆತಂದು ಪೋಸ್ಟ್ ಮಾರ್ಟಂ ಮಾಡಿಸಬೇಕಾಗಿದೆ. ಈ ಜವಾಬ್ದಾರಿಯನ್ನು ಅರಣ್ಯ ಇಲಾಖೆಯೇ ನಿರ್ವಹಿಸಬೇಕು ಎಂದು ನೊಂದ ರೈತರ ಆಗ್ರಹವಾಗಿದೆ.