ಮೂಡಿಗೆರೆ ತಾಲ್ಲೂಕು ಹೊಸಕೆರೆ ಸಮೀಪ ಹೇರಿಕೆ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಡಲಾಗಿದೆ.
ಗ್ರಾಮದ ರವಿರೆಡ್ಡಿ ಎಂಬುವವರ ಮನೆಯ ಸಮೀಪ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಉರಗ ಪ್ರೇಮಿ ಬಣಕಲ್ ಸ್ನೇಕ್ ಆರೀಫ್ ಅವರನ್ನು ಕರೆತಂದು ಕಾಳಿಂಗ ಸರ್ಪವನ್ನು ಹಿಡಿದು ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಚೇತನ್, ಸಿಬ್ಬಂದಿಗಳಾದ ಗಿರೀಶ್, ಆನಂದ್, ಲಕ್ಷ್ಮಣ್ ಇದ್ದರು.